ಮಂಗಳವಾರ, ಫೆಬ್ರವರಿ 2, 2010

ವೆನಿಸ್ಸಿನ ವ್ಯಾಪಾರ -ನಾಟಕದ ವಿಮರ್ಶೆ.


ವಿಲಿಯಂಶೆಕ್ಸಪಿಯರಗೆ ಹೆಸರು ತಂದುಕೊಟ್ಟನಾಟಕಗಳಲ್ಲಿ ವೆನಿಸ್ಸಿನ ವ್ಯಾಪಾರವೂ ಒಂದು.ಸಾಗರದ ನೀನಾಸಂ ತಂಡವು ಮಂಚಿಕೇರಿಯಲ್ಲಿ ಈ ನಾಟಕವನ್ನು ಇತ್ತೀಚೆಗೆ ಪ್ರದರ್ಶಿಸಿತು.ಕಥಾ ಸಾರಂಶ:ಆಂಟೊನಿಯೊ ಮತ್ತು ಬಸಾನಿಯೋ ಮಿತ್ರರು. ಮಿತ್ರ ಬಸಾನಿಯೋಗೆ ಆತನ ಪ್ರೀತಿಸಿದ ಹುಡುಗಿಯನ್ನು ಭೇಟಿಯಾಗಲು ಹಣದ ಅವಶ್ಯವಿರುಗಾಗಿ ಆಂಟೊನಿಯೊ ಪ್ರೀತಿಯ ಗೆಳಯನಿಗಾಗಿ ಜಾತೀಯ ಸ್ವಾಭಿಮಾನ ಬಿಟ್ಟು ಯಹೂದಿ ಒಬ್ಬನ ಹತ್ತಿರ ಸಾಲಪಡೆಯುತ್ತಾನೆ.ಯಹೂದಿ ಶೈಲಾಕ್ ನು ಸಾಲದ ಜಾಮೀನಿಗೆ ಆಂಟೊನಿಯೊನ ಒಂದು ಶೇರುಮಾಂಸ ಪಡೆಯುವದಾಗಿ ಕರಾರು ಆಗುತ್ತದೆ. ಹಡಗಿನ ವ್ಯಾಪಾರಿ ಆದ ಆಂಟೊನಿಯೊ ಸಮಯಕ್ಕೆ ಸರಿಯಾಗಿ ಸಾಲ ಹಿಂದಿರುಗಿಸಲಾಗದೇ ಕರಾರಿನ ಪ್ರಕಾರ ದೇಹತ್ಯಾಗ ಮಾಡುವ ಸನ್ನಿವೇಶ ಬರುತ್ತದೆ.ಅಷ್ಟರಲ್ಲಿ ಆತನ ಗೆಳೆಯ ಬಸಾನಿಯೊ ಪ್ರೇಯಸಿಯ ಮನ ಗೆದ್ದು ಅವಳಿಗೆ ಮಾತು ಕೊಟ್ಟಂತೆ ಅವಳ ನೆನಪಿನ ಉಂಗುರ ಜೊತೆಗೆ ಅಪಾರ ಹಣದೊಂದಿಗೆ ಆಂಟೊನಿಯೊನ ಋಣತೀರಿಸಲು ವೆನಿಸ್ಸಿಗೆ ಮರಳುತ್ತಾನೆ. ನಾಟಕಕಾರ ಇಷ್ಟಕ್ಕೇ ಸುಮ್ಮನಿರದೇ ಹೊಸ ತಿರುವು ಕೊಡುತ್ತಾನೆ.ಅಪಾರ ಹಣವನ್ನು ಕೊಟ್ಟಹುಡುಗಿಯು ತನ್ನ ಪತಿಯು ವೆನಿಸ್ಸಿಗೆ ತಲುಪುವ ಮುನ್ನ ಅಲ್ಲಿಸೇರುತ್ತಾಳೆ.ಕರಾರಿನ ಹಕ್ಕು ಪಡೆಯಲು ಯಹೂದಿ ಶೈಲಾಕ್ ನು ನ್ಯಾಯಲಯಕ್ಕೆ ಮೊರೆಹೋಗುತ್ತಾನೆ.ಅವಳು ನ್ಯಾಯವಾದಿಯ ವೇಷದಲ್ಲಿ ಆಂಟೊನಿಯೊ ನ ಮಾಂಸ ತೆಗೆಯಲು ಅಡ್ಡಿಇಲ್ಲ ಆದರೆ ಮಾಂಸತೆಗೆಯುವಾಗ ಒಂದು ಹನಿ ರಕ್ತ ಬೀಳಬಾರದು ಎಂದು ಕರಾರಿನಲ್ಲಿದ್ದ ಲೋಪ ಎತ್ತಿಹಿಡಿದು ದುರಾಸೆಯ ಯಹೂದಿಯ ಯೋಜನೆ ತಲೆಕೆಳಗೆ ಮಾಡಿ ಗಂಡನ ಗೆಳೆಯನನ್ನು ಸಾವಿನಾಂಚಿನಿಂದ ರಕ್ಷಿಸುತ್ತಾಳೆ.ವಕಾಲತ್ತಿನ ಸಂಭಾವನೆಯಾಗಿ ಅವಳೇಕೊಟ್ಟ ಉಂಗುರ ಕೇಳಿ ಆತನನ್ನು ಪೆಚಿಗೆ ಸಿಲುಕಿಸಿ ಪರೀಕ್ಷೆಗೆ ಒಡ್ಡುತ್ತಾಳೆ.ನಂತರ ಎಲ್ಲವೂ ಸುಖಾಂತ್ಯ. ಈ ನಾಟಕದಲ್ಲಿ ಜಾತೀಯ ಸಂಘರ್ಷ,ವ್ಯಾಪಾರಿ ಬದುಕು,ಸುಂದರ ಪ್ರೇಮಕಥೆ ಈ ಮೂರೂ ವಿಷಯವನ್ನು ಚನ್ನಾಗಿ ಬಳಸಿಕೊಳ್ಳಲಾಗಿದೆ.ನವಿರಾದ ನಿರೂಪಣೆ ಚಕಚಕ ಸಾಗುವ ದೃಶ್ಯಾವಳಿ ನೋಡುಗರಿಗೆ ಸಮಯ ಸರಿದಿದ್ದು ಗೊತ್ತಾಗದಂತೆ ಮಾಡುತ್ತವೆ.ಉಡುಗೆಯ ಆಯ್ಕೆ ಒಂದು ಹೊರತು ಪಡಿಸಿದರೆ ಸರಳ ರಂಗ ವಿನ್ಯಾಸ ,ಪಾಶ್ಚಾತ್ಯಹಾಗೂ ದೇಸಿಯ ಮಿಶ್ರಣದ ಹಿನ್ನಲೆ ಸಂಗೀತ ನಾಟಕವು ನೋಡುಗರಿಗೆ ಒಂದುತರಹದ ಆಹ್ಲಾದತಂದುಕೊಟ್ಟಿತು ಎಂದರೆಅದುಅತಿಶಯೋಕ್ತಿಎನಿಸಲಾರದು





. ಚಿತ್ರಕೃಪೆ :ನೀನಾಸಂ

ಶುಕ್ರವಾರ, ಜನವರಿ 22, 2010

ವ್ಹಾ ಲಾಲ್ ಬಾಗ್!









ತರಕಾರಿ ಕೆತ್ತನೆ




ನಿಜಕ್ಕೂ ಲಾಲ್ ಬಾಗ್ ಹಸಿರು ಮತ್ತು
ಹೂಗಳಿಂದ ಕಂಗೊಳಿಸುತ್ತಿದೆ.ಈ ಬಾರಿ ಹೂಗಳನ್ನು ತುಂಬಾ ಚನ್ನಾಗಿ ಅಲಂಕರಿಸಿದ್ದಾರೆ.ಕೆಲ ಚಿತ್ರಗಳನ್ನು ಇಲ್ಲಿ ನೋಡಬಹುದು.ಹೂ ಬಾಡುವಮುನ್ನ ಒಮ್ಮೆ ನೋಡಿಬನ್ನಿ.ಹೊರಡುವಾಗ ನಿಮ್ಮ ಜೊತೆಗೆ ಆಪ್ತರನ್ನು ಕರೆದೊಯ್ಯಿರಿ ಅಲ್ಲಿ ನೀವು ಹೂಗಳ ಜೊತೆ ನಿಮ್ಮವರ ಮುಖ ಅರಳಿರುವದನ್ನು ಕಾಣುವಿರಿ!.ಭಾಂಧವ್ಯ ಮತ್ತಷ್ಟು ಹಸನಾಗಲಿ (ಸಂಜೆ ವೇಳೆ ಕಂಡು ಬಂದ ಲಾಲ್ ಬಾಗ್ ಕೆರೆ.)

ಮಂಗಳವಾರ, ಜನವರಿ 12, 2010

ಸಂಕ್ರಾಂತಿ ಬರುತ್ತಿದೆ



ಸಂಕ್ರಾಂತಿ ರೈತರ ಹಬ್ಬ. ವರ್ಷವಿಡೀಶ್ರಮಪಟ್ಟು ಬೆಳೆದ ಬೆಳೆಯು ಕೈಗೆ ಬರುವ ಪರ್ವಕಾಲ. ಈ ಬಾರಿ  ಮಳೆಯು ಉತ್ತರ ಕರ್ನಾಟಕದಲ್ಲಿ ನೆರೆ ತಂದು ಹಾವಳಿ ಎಬ್ಬಿಸಿದ ನಂತರ ಈಗ ಮತ್ತೆ ಹೊಯ್ಯುತ್ತಾ ಪುನಃ  ಪುನಃ  ಬರೆ ಹಾಕುತ್ತಲೇ ಇದೆ. ಪರಿಣಾಮವಾಗಿ ಉತ್ತರ ಕನ್ನಡದಲ್ಲಿ ಭತ್ತದಗದ್ದೆ ಮತ್ತು ಕೊಯ್ದು ಸಂಸ್ಕರಣೆ ಆಗುತ್ತಿದ್ದ ಭತ್ತ,ಹುಲ್ಲು,ಅಟ್ಟದಲ್ಲಿ ಒಣಹಾಕಿದ ಅಡಿಕೆ ಫಸಲು ಈಗಾಗಲೇ  ಹಾಳಾಗಿದೆ.ರೈತರ ಬದುಕು ಏರಿದ ಬೆಲೆ ಮತ್ತು ಕೃಷಿ ಕಾರ್ಮಿಕರ ಕೊರತೆಯ ನಡುವೆ ಕಂಗಾಲಾಗಿದೆ.ಬದಲಾದ ಈಗಿನ ಕೃಷಿಕಾರ್ಮಿಕ ಜನರ ಮನಸ್ಥಿತಿ ನೋಡಿದ ಹಳಬರು ಕೃಷಿ ಮುಂದುವರಿಸಿಕೊಂಡು ಹೋಗುವದು ಕಷ್ಟ ಎನ್ನುತ್ತಿದ್ದಾರೆ.ಕೃಷಿಕರ ಮಕ್ಕಳು ವ್ಯವಸಾಯ ಸಾಕಪ್ಪಾ .ಇದರ ಉಸಾಬರಿ ಬೇಡ ಎಂದೆನಿಸುವಷ್ಟರ ಮನ ಸ್ಥಿತಿಗೆ ತಲುಪುತ್ತಿದ್ದಾರೆ. ಇದು ನಿಜಕ್ಕೂ ದುರಂತ. ಈಗ  ಸಂಕ್ರಾಂತಿಯ ಸಂಭ್ರಮವನ್ನು ಮಳೆಯ ಕಸಿದುಕೊಂಡಿದೆ.ಭರವಸೆಯ ದಿನಗಳು ಬಂದೇಬರುತ್ತದೆ ಎಂಬ ನಿರೀಕ್ಷೆಯಲ್ಲಿ  ಎಂದಿನಂತೆ ರೈತ ತನ್ನಕಾರ್ಯದಲ್ಲಿ ಮಗ್ನನಾಗಿದ್ದಾನೆ.ಎಲ್ಲರಿಗೂ ಮುಂದೆ ಒಳ್ಳೆಯ ದಿನ ಬರಲಿ.ರೈತನ ಉಳುಮೆ ಆನಂದದಾಯಕವಾಗಲಿ.  ಬರುವ ಸಂಕ್ರಾಂತಿಯುಎಲ್ಲರಿಗೂ ಒಳಿತು ಉಂಟುಮಾಡಲಿ. ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.



     *ಚಿತ್ರ ಅರುಣೋದಯ.   
       ನವಿಲುಗುಡ್ಡ (ಶಿವಮೊಗ್ಗ)





ಮಂಗಳವಾರ, ಡಿಸೆಂಬರ್ 29, 2009

**ನಿ-ವೇದನೆ**

ಇಲ್ಲಿ ಹುಡುಗನು ತನ್ನ ಪ್ರೇಮದ ಅಳಲನ್ನು ಪ್ರೇಯಸಿಯೊಂದಿಗೆ ತೋಡಿಕೊಳ್ಳಲು ಹನಿಸಾಲಿಗೆ ಮೊರೆಹೋಗಿದ್ದಾನೆ.
ಸಂದರ್ಭ: ದಿನಾಲೂ ದಾರಿಯ ಮೇಲೆ ಎದುರಾಗುವ ಹುಡುಗಿಯ ಕಂಡಾಗ ದಿನ ಎನೋ ಒಂಥರಾ ಅನಿಸಿಬಿಟ್ಟಿತು.ಇಲ್ಲ ಹುಡುಗನಿಗೆ ತಡೆಯಲಾಗುತ್ತಿಲ್ಲ. ಬಹಳ ದಿನಗಳಿಂದ ತನ್ನೊಳಗೆ ಅದುಮಿಟ್ಟುಕೊಂಡ ಭಾವನೆ ವ್ಯಕ್ತಪಡಿಸಲು ಆತ ಕಾಯುತ್ತಿದ್ದಾನೆ.ಇಂದು ದಿನ ಬಂದಿದೆ.ಎಂದಿನಂತೆ ದಾರಿಯಲ್ಲಿ ಮತ್ತೆ ಎದುರಾಗಿ ತನ್ನ ನೋಡಿ ಮುಗುಳ್ನಕ್ಕಾಗ ಸಾಲನ್ನು ಹುಡುಗಿಗೆ ಹೇಳಲು ಕಾದು ನಿಂತಿದ್ದಾನೆ.

**ನಿ-ವೇದನೆ**


...ನಿನ್ನ ಹೃದಯದ ಹರಿವಿನಲ್ಲಿ ನಾನು
ಪ್ರೇಮದ ಹಾಯಿದೋಣಿಯ ಸವಾರ
ತೆಲಿಸುವೆಯೋ ಮುಳುಗಿಸುವೆಯೋ
ಅದು ನಿನ್ನ ಮನದಲೆಗೆ ಬಿಟ್ಟ ವಿಚಾರ..

ಭಾನುವಾರ, ನವೆಂಬರ್ 8, 2009

ಹೂ ಮಾತಾಡಲಿಲ್ಲ...


ಮೊನ್ನೆ ದಾರಿಅಂಚಿನಲ್ಲಿ ಹೋಗುತ್ತಿದ್ದಾಗ ಸಣ್ಣಗೆ ಯಾರೋ ಕರೆದಂತಾಯಿತು.ತಿರುಗಿ ನೋಡಿದರೆ ಹೂವು!.ನನ್ನ ಖುಷಿಗೆ ಪಾರವೇ ಇಲ್ಲದಾಯಿತು. ಒಂದು ಹೂ ನನ್ನ ಕರೆದಾಗ ನಾ ಸುಮ್ಮನಿರಲು ಸಾಧ್ಯವೇ? ಅದೂ ಕೈಯಲ್ಲಿ ಕ್ಯಾಮರಾ ಇರುವಾಗ.ಹೂವನ್ನು ಪ್ರೀತಿಯಿಂದ ಮುಟ್ಟಿದೆ ಅದು ನಕ್ಕಿತು .ಆ ಕ್ಷಣಕ್ಕೆ ಬೀಸಿದ ಬಿಸಿಗಾಳಿಗೆ ಅಲ್ಲಾಡಿದರೂ ಸ್ವಲ್ಪಹೊತ್ತಿಗೆ ಸಾವರಿಸಿಕೊಂಡು ಮಾತನಾಡಲು ಶುರುಮಾಡಿತು.ಇಬ್ಬರೂ ತುಂಬಾ ಮಾತನಾಡಿದೆವು.ಕಷ್ಟಸುಖ ಹಂಚಿಕೊಡೆವು.ಇಬ್ಬರಿಗೂ ಕಾಡುತ್ತಿದ್ದ ಒಂಟಿತನ ಕೆಲ ಸಮಯ ದೂರವಾಯಿತು.

ನಿನಗೆ ಏನು ಇಷ್ಟಅಂತ ಕೇಳಿದೆ ಪುಟ್ಟ ಮಕ್ಕಳು ವಾಲಾಡುತ್ತಾ ನನ್ನಬಳಿ ಬಂದು ನನ್ನ ಮೊಗ್ಗು ಹಾಗೂ ಹೂಗಳನ್ನುಹರಿಯುವಾಗ ಪರಮಾನಂದ ವಾದರೆ ಆ ಸಮಯದಲ್ಲಿ ಹೂ ಅರಳಲು ನಾನೇ ಕಾರಣ, ಅದು ನನ್ನ ಗಿಡ ಎನ್ನುವ ಅವರ ತಾಯಿ ಮಗುವನ್ನು ಎಳೆದೊಯ್ಯುವಾಗ ತನಗೆ ದುಃಖ ಆಗುವದು ಎಂದಿತು.ಆ ಹೊತ್ತಿನಲ್ಲಿ ಫೋಟೊತೆಗೆಯಲು ಶುರುಮಾಡಿದೆ ಪಾಪ ಹೂ flashlight ಗೆ ಬೆಚ್ಚಿತು.ಪ್ರೀತಿಯಿಂದ ಮುಟ್ಟಿದೆ ಮತ್ತೆ ನಕ್ಕಳು!ನಾ ಹೇಳಿದೆ ನೀನು ಹಿಂದಿನಿಂದ ನೋಡಿದರೂ ಸುಂದರವಾಗಿದ್ದಿಯಾ ಎನ್ನುತ್ತಾ ಫೋಟೊತೆಗೆದೆ ಹೂ ನಾಚಿತು.


ಕಪ್ಪು ಬಣ್ಣದ ಗುಂಗಾಡು (ದುಂಬಿ) ಬಗ್ಗೆ ಕೇಳಿದೆ ಬಂದಾಗ ಭಯವೇ ಜಾಸ್ತಿ ಅದೋ ಅದರ ರೆಕ್ಕೆಬಡಿತದ ಸದ್ದು ಅಬ್ಬಾ ಎಂದಿತು.ಪಾತರಗಿತ್ತಿ ಬಂದಾಗ ಅದು ಕೊಡುವ ಕಚಗುಳಿ, ಆಗ ಆಗುವ ಸಂತೋಷ ಅದರ ಭಾಷೆಯಲ್ಲಿ ಹೇಳಿತು ಕೆಲವು ಮಾತ್ರ ಅರ್ಥವಾದವು.ಕೆಲ ಹೊತ್ತು ಹೂ ಜೊತೆಮಾತನಾಡುವ ಅಪರೂಪದ ಭಾಗ್ಯನನ್ನದಾಯಿತು.
ಸ್ನೇಹಿತರೇ ತುಂಬಬೇಜಾರಾಗುತ್ತಿದೆ. ಆ ಹೂವು ನಾಳೆ ಅಷ್ಟರಲ್ಲಿ ಬಾಡಿಹೋಗುವದರ ಜೊತೆಗೆ ಈ ಮಳೆಗಾಲದ ಬದುಕು ಮುಗಿಸುತ್ತದೆ. ಬೀಳ್ಕೊಡುವಾಗ ಹೂವಿಗೆ ಮುತ್ತಕೊಟ್ಟೆ.ಜೊತೆಗೆ ಹೇಳಿದೆ ಮುಂದಿನ ಮಳೆಗಾಲಕ್ಕೆ ಸಾವಿರ ಸಂಖ್ಯೆಯಲ್ಲಿಸಾವಿರದೇ ಹುಟ್ಟಿಬಾ. ನಾ ನಿನ್ನಗೌರವಿಸುತ್ತೆನೆ. ನಿನಗೆ ವಂದಿಸುತ್ತೇನೆ ಯಾಕೆ ಗೊತ್ತೆ? ನಿನ್ನನ್ನು ಎಲ್ಲೇ ಹಾಕಿದರೂ ನಿನ್ನ ಪರಿಮಳ, ಸೌಂದರ್ಯ ಕೆಡದು. ಹೂವೇ ನಿನ್ನ ಎತ್ತರ ಅಪರಿಮಿತ. ನೀ ಸಣ್ಣವನಲ್ಲ,ಸಣ್ಣವನಲ್ಲಎಂದೆ. ಹೂ ಮಾತಾಡಲಿಲ್ಲ...

ಸೋಮವಾರ, ಅಕ್ಟೋಬರ್ 19, 2009

ಕಪ್ಪು+ ಬಿಳಪು=ಹೊಸಹೊಳಪು.









ಕಪ್ಪು ಬಿಳಪು ಚಿತ್ರಗಳೇ ಹೀಗೆ ಯಾವಾಗಲೂ ತಮ್ಮತನ ಹೊಂದುಕೊಂಡಿರುತ್ತದೆ.ಇಲ್ಲಿ ನೆರಳುಬೆಳಕಿನಾಟ ಚನ್ನಾಗಿ ಆಡಬಹುದು.ಅಲ್ಲದೇ ಭಾವನೆ,ವಿಷಾದಗಳನ್ನು ಗಾಢವಾಗಿ ತೋರಿಸಬಹುದು.ಬಣ್ಣದ ಚಿತ್ರದ ಮುಂದೆ ಇವು ತಮ್ಮದೇ ಆದ ಒಂದು ಚೌಕಟ್ಟಿನಲ್ಲಿ ಅಜರಾಮರವಾಗಿದೆ.ಜೊತೆಗೆ ಅದರದೇ ಆದ ಅಭಿಮಾನಿ ಬಳಗಹೊಂದಿದೆ.ನಮ್ಮೊಳಗೆ ಹಂಚಿಕೊಳ್ಳಲು ಚಿತ್ರಗಳನ್ನು ಹಾಕಿದ್ದೇನೆ.ನೋಡಿ.ಅಭಿಪ್ರಾಯತಿಳಿಸಿ.

ಸೋಮವಾರ, ಸೆಪ್ಟೆಂಬರ್ 28, 2009

ಎಚ್ಚರಾ..



ಎಚ್ಚರಾ..
ಕಾಡಂಚಿನ ಗಿಡಗಂಟಿಗಳಲ್ಲಿ
ಬಳುಕುವ ನಡನಡುವಿನಲ್ಲಿ
ಹೊಳೆವ ಕಾಮನಬಿಲ್ಲತೆರದಿ
ಮೈ ಮನಮರೆತು ತೇಲಾಡುವ
ಜೀವ ರಾಶಿಗೆ ಕಾದು ಕುಳಿತಿದೆ.!