ಭಾನುವಾರ, ಅಕ್ಟೋಬರ್ 15, 2017

ಮರೆಯಲಾಗದ ಯಕ್ಷ  ಚೈತನ್ಯ
ಚಿಟ್ಟಾಣಿ ರಾಮಚಂದ್ರ ಹೆಗಡೆ.     


ಸುಮಾರು1998 ಇಸ್ವಿಯ ಸಮಯವಿರಬಹುದು ಮಂಚೀಕೇರಿಯ ಸಮಾಜ ಮಂದಿರದಲ್ಲಿ ಗದಾಯುದ್ದ ಪ್ರಸಂಗವಿತ್ತು ಅದು ನಾನು ನೋಡಿದ ಮೊದಲ ಯಕ್ಷಗಾನ   ಪ್ರಸಂಗ. "ಇತ್ತ ಕುರುಕ್ಷೇತ್ರದಿ ಕುರುರಾಯ ಇದನೆಲ್ಲ ಕಂಡುಎಂಬ ಪದ್ಯ ಶುರುವಾಗಿತ್ತು ಚಿಟ್ಟಾಣಿಯವರ  ರಂಗಸ್ಥಳ  ಪ್ರವೇಶದ ಪರಿರಣರಂಗದ ಕೌರವನ ಅಸಹಾಯಕತೆಯನ್ನು ಅಭಿನಯಿಸಿದ ಬಗೆ ನಿಜಕ್ಕೂ ಅವಿಸ್ಮರಣೀಯ. ಅಂದಿನ  ಅವರ ಆಭಿನಯಕ್ಕೆ  ಬಿದ್ದ ಅಸಂಖ್ಯಾತ ಶೀಟಿಯಲ್ಲಿ ನನ್ನದೂ ಒಂದು ಪಾಲಿತ್ತು. ಒಬ್ಬ ಜನ ಸಾಮನ್ಯನಿಗೂ ಕಲೆಯ ರುಚಿ ಹತ್ತಿಸುವ ಮೂಲಕ ಯಕ್ಷಗಾನದ ಅಗಾಧತೆಯನ್ನುಬಿಚ್ಚಿಟ್ಟ   ಚಿಟ್ಟಾಣಿಯವರ ಕಲಾಶೈಲಿಗೆ  ಮಾರು ಹೋಗಿ ದಿನದಿಂದಲೇ  ನಾನು ಒಬ್ಬ ಖಾಯಂ ಯಕ್ಷಗಾನದ  ಅಭಿಮಾನಿ ಆಗಿಬಿಟ್ಟೆ.

ಚಿಟ್ಟಾಣಿಯವರ ಅಗಲುವಿಕೆಯು  ಲಕ್ಷಾಂತರ ಯಕ್ಷಗಾನ ಅಭಿಮಾನಿಗಳಿಗೆ ನೋವುತಂದುಕೊಟ್ಟಿದೆ. ಅವರ ನಿಧನದ ನಂತರ ಚಿಟ್ಟಾಣಿಯವರನ್ನು ಹತ್ತಿರದಿಂದ ಬಲ್ಲವರು ಸಾಕಷ್ಟು ಲೇಖನಬರೆಯುವದರ ಮೂಲಕ ನೆನಪಿಸಿಕೊಂಡರು.ಹೀಗೆ ಒಂದು ಪತ್ರಿಕೆ ಯಲ್ಲಿ ಒಬ್ಬ ಹೆಸರಾಂತ ಕಲಾವಿದರು ದಿವಂಗತ ಚಿಟ್ಟಾಣಿಯವರ ಹೊಗಳುತ್ತಾ ಯಕ್ಷಗಾನವನ್ನು ಮುರಿದು  ಕಟ್ಟಿದರು ಎಂದು ಬರೆದಿದ್ದು ಓದಿದೆ ಅದು ತಪ್ಪು ಎಂದೆನಿಸಿ ಇದನ್ನು ಬರೆಯುತ್ತಿದ್ದೇನೆ.

  ಯಕ್ಷಗಾನವನ್ನು ಮುರಿದು ಕಟ್ಟಲಿಲ್ಲ ಮೆರೆದು ಕಟ್ಟಿದರು.

ಚಿಟ್ಟಾಣಿಯವರ ವೇಷವೆಂದರೆ  ಯಕ್ಷಗಾನ ಪ್ರೇಕ್ಷಕರಿಗೆ ರಸದೌತಣವಾಗಿತ್ತು.ಪೋಟೋಗ್ರಾಪರ್ ಗಳಿಗೆ  ಅವರ ಪೋಟೋ ಸೆರೆಹಿಡಿಯುವ ಸಂಭ್ರಮವೇ ಖುಷಿ ಕೊಡುತ್ತಿತ್ತು.ಬಹುಶಃ ವೇಷ ಧಾರಿಯಾಗಿ ಚಿಟ್ಟಾಣಿಯವರು ರಂಗಸ್ಥಳದಲ್ಲಿ  ಕ್ಲಿಕ್ಕಿಸಿಕೊಂಡ ಪೋಟೋ ಹಾಗೂ ಅವರೊಟ್ಟಿಗೆ  ಚೌಕಿಯಲ್ಲಿ ಕುಳಿತು ಅಭಿಮಾನಿಗಳು ತೆಗೆಸಿಕೊಂಡ ಪೋಟೋಗಳ ಸಂಖ್ಯೆಯಷ್ಟು ಮತ್ತಾವ ಯಕ್ಷಗಾನ ಕಲಾವಿದರೂ ತೆಗೆಸಿಕೊಂಡಿರಲು  ಸಾಧ್ಯವಿಲ್ಲ  ಹೀಗಿದೆ ಅವರ ಜನಪ್ರೀಯತೆ. ಅವರು ಯಕ್ಷಕಲೆಗೆ ಮುಡಿಪಾಗಿ ದಣಿದು ಕುಣಿದಿದ್ದಕ್ಕೇ ಜನರು ಅವರನ್ನು ಮೆರೆಸಿದ್ದು.

ಜಾನಪದದ ಕಲಾಪ್ರಕಾರವಾದ ಯಕ್ಷಗಾನಕ್ಕೆ ಯಾವುದೇ ಚೌಕಟ್ಟಿಲ್ಲ
ಇದು ಎಲ್ಲರೂ ಒಪ್ಪಿಕೊಂಡು ಬಂದ ಸಂಗತಿ. ಕಾಲ ಕಾಲಕ್ಕೆ  ರಂಗ ಪ್ರಯೋಗಗಳಲ್ಲಿ ಪರಿಷ್ಕರಣೆ ಗೊಳ್ಳುತ್ತಾ ಇಂದಿನ ವರೆಗೂ ದಿನ ದಿನವೂ ಹೊಸ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ .
ನಮ್ಮ ಚಿಟ್ಟಾಣಿ ಹೊಸ ಬಗೆಯಕುಣಿತ ಮಾಡಿತೋರಿಸಿದ್ದಾರೆ.
ಏಕತಾಳದ ಪದ್ಯದಲ್ಲಿ ಚಾಲೂ ಕುಣಿತ ಎಂಬ ಕುಣಿತ ಪ್ರಕಾರವಿದ್ದು ಚಿಟ್ಟಾಣಿಯವರು ಅದಕ್ಕೆ ತನ್ನದೇ ಆದ ಹೊಸ ಕುಣಿತ ಸೇರಿಸಿದ್ದಾರೆ. ತಾ ತಯ್ಯತ್ತದಿನ, ತೈ ತಯತ್ತದಿನ ಎಂಬ ಬಿಡ್ತ್ಗೆ ಶುರುವಾಗುವಾಗ ಕುಕ್ಕರ ಗಾಲಿನಲ್ಲಿ ಕುಳಿತು ಕೈ (ಹಸ್ತ) ತಿರಿಸುತ್ತಾ, ತೈತಾ ಧೇಂ ತೈತಾ ಧೇಂ ಎಂಬಲ್ಲಿಗೆ ಕ್ರಮೇಣ ಭುಜವನ್ನು ಹಾರಿಸುವ ಚಿಟ್ಟಾಣಿ ಶೈಲಿ ಹೇಗೆ ಮರೆಯಲು ಸಾಧ್ಯ?. ಇದು ಇಂದಿಗೂ ಚಾಲ್ತಿಯಲ್ಲಿದೆ. ಇಂತಹ ಸಂಗತಿಗಳೇ ಕಲಾಸಕ್ತರನ್ನು ಸೆರೆಹಿಡಿಯುತ್ತದೆ ಇದು ರಂಗಸ್ಥಳದಲ್ಲಿ ಮೆರೆದ ವಿಷಯವಲ್ಲವೇ?.

 ಲಯ ಬದ್ಧತೆಯಿಂದ ರಂಗಸ್ಥಳದಲ್ಲಿ ಇರುವಷ್ಟೂ ಹೊತ್ತು ಪ್ರೇಕ್ಷಕರನ್ನು ಹಿಡಿದಿಟ್ಟು ಕೊಳ್ಳುವಂತ ಕಲಾನೈಪುಣ್ಯಕ್ಕೆ  ಸಹಜವಾಗಿಯೇ ಚಿಟ್ಟಾಣಿಯವರಿಗೆ   ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ದಿವಂಗತ ಶಂಭು ಹೆಗಡೆ ಹಾಗೂ ಚಿಟ್ಟಾಣಿ ಹೆಗಡೆಯವರು ಯಕ್ಷಕಲಾ ನಾಣ್ಯದ ಎರಡು ಮುಖಗಳಂತೆ ಎಂದರೆ ಅದು ಅತಿಶಯೋಕ್ತಿಯಲ್ಲ. ರಂಗತಂತ್ರದ ಹೊಸ ಆಯಾಮದ ಮೂಲಕ  ಯಕ್ಷಗಾನವನ್ನು ಮತ್ತೂ ಮೇಲಕ್ಕೇರಿಸಿದ  ದಿವಂಗತ ಶಂಭು ಹೆಗಡೆಯವರ ಶ್ರಮವನ್ನು ನಾವು  ಇಲ್ಲಿ ಸ್ಮರಿಸಲೇಬೇಕು.

ಪಾತ್ರ ಪೋಷಣೆ.
ಪ್ರಸಂಗದ ಪಾತ್ರ ಚಿತ್ರಣಕ್ಕೆ ತಕ್ಕ ಭಾವಾಭಿನಯ,ಅಷ್ಟೇ ಸಮರ್ಥವಾಗಿ ಅಂಗೋಪಾಂಗದ ಬಳಕೆಯಿಂದ ಪದ್ಯಗಳಿಗೆ ಜೀವ ತುಂಬುವ ಬಗೆ ಅದ್ಭುತ.
ಕೆಲ ಪದ್ಯಗಳಿಗೆ ದೇಹಕ್ಕೆ  ಆಯಾಸ ಮಾಡಿಕೊಳ್ಳದೇ ಕೇವಲ ಆಂಗಿಕ ಅಭಿನಯದಿಂದ ತುಂಬಿಕೊಡುವ ಕಲೆ ಇವರಿಗೆ ಕರಗತವಾಗಿಬಿಟ್ಟಿತ್ತು. ಇದನ್ನು ಪ್ರೇಕ್ಷಕರೂ ಕೂಡಾ ಅಷ್ಟೇ ಆನಂದದಿಂದ ಸವಿಯುತ್ತಿದ್ದರು.
ತನಗೆ ಸಿಕ್ಕ ಪಾತ್ರಕ್ಕೆ ನೂರಕ್ಕೆ  ನೂರು ಭಾಗವಾಗಿ ತನ್ಮಯತೆಯಿಂದ  ಅಲ್ಲಲ್ಲಿ ಪ್ರಸಂಗದ ಪದ್ಯವನ್ನು ಸುಂದರವಾಗಿ ಎತ್ತುಗಡೆ ಮಾಡುತ್ತಾ ಕಥೆ ಮುಂದುವರುಸಿಕೊಂಡು ಹೋಗುವದರ ಜೊತೆಗೆ ಸಹ ಪಾತ್ರಧಾರಿಗೆ ಮಾತನಾಡಲು  ಅನುಕೂಲ ಮಾಡಿಕೊಟ್ಟಿದ್ದು ಚಿಟ್ಟಾಣಿಯವರ ಸರಳತೆಗೆ ಸಾಕ್ಷಿ. ಕೆಲವೊಮ್ಮೆ ಶೃಂಗಾರರಸದ ಅಭಿನಯದಲ್ಲಿ ಕಲಾಧರ ,ಭಸ್ಮಾಸುರದಂತಹ ಪಾತ್ರಗಳನ್ನು ನಿರ್ವಹಿಸುವಾಗ ಸ್ತ್ರೀ ವೇಷದ ಅಂಗಾಂಗ ವರ್ಣನೆಯಲ್ಲಿ ತುಸು ಹೆಚ್ಚಾಯಿತು ಎನ್ನುವಷ್ಟು ಅಭಿನಯಿಸಿದ್ದೂ ಇದೆ.

ದೇಹದಲ್ಲಿ ಶಕ್ತಿಇರುವ ತನಕ ಅಕ್ಷರಸಹ ರಂಗಸ್ಥಳವನ್ನು  ಆಳಿದ ಚಿಟ್ಟಾಣಿ ತಮ್ಮ ನಿಧನದ ನಂತರವೂ ಎಲ್ಲರ ಮನದಲ್ಲಿ  ತನ್ನ ಛಾಪು ಮೂಡಿಸಿದ್ದಾರೆ .
ಈಗ ಅಸಂಖ್ಯಾತ ಕಲಾಸಕ್ತರು ಅವರೊಟ್ಟಿಗೆ ಕಳೆದ ಹಿಂದಿನ ನೆನಪುಅವರ ರಸ ಭರಿತ ಅಭಿನಯ, ಎಂಭತ್ನ್ಕಾಲ್ಕು ವಯಸ್ಸಿನಲ್ಲಿಯೂ  ಮುಕ್ಕಾಗದ ಮರೆಯಯಲಾಗದ ಕುಣಿತದ ವೈಭವವನ್ನು ಸಾಮಾಜಿಕ ಜಾಲತಾಣ, ಯೂಟ್ಯೂಬ್, ಮೂಲಕ ಮತ್ತೆ ಮತ್ತೆ ನೋಡುತ್ತಾ ಕಲಾ ವಿಮರ್ಶೆಯನ್ನು  ಪತ್ರಿಕೆಯ ಅಂಕಣದಲ್ಲಿ ಮೆಲುಕು ಹಾಕುತ್ತಾ ಬಂದಿದ್ದಾರೆ.ಇದು ಮುಂದೆಯೂ ಅಭಾಧಿತವಾಗಿ ಮುಂದುವರಿಯಲಿದೆ!.
ಜೀವನದ ನಂತರದಲ್ಲೂ ರೀತಿಯಲ್ಲಿ ಜನರನ್ನು ಯಕ್ಷಗಾನದ ಸುತ್ತ ಗಿರ್ಕಿ ಹೊಡೆಯುವಂತೆ  ಮಾಡಿದ ಯಕ್ಷ  ಚೈತನ್ಯ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬದುಕು ನಿಜಕ್ಕೂ ಸಾರ್ಥಕ.
(15-10-2017, ಸಿರಸಿಯ ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)















ಶುಕ್ರವಾರ, ಸೆಪ್ಟೆಂಬರ್ 18, 2015

Tech ಟಾನಿಕ್ -01: ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್ ಫೋನ್ Redmi 2


ಡಿಜಿಟಲ್ ಯುಗದಲ್ಲಿ ಕಾಲ ಕಾಲಕ್ಕೆ ಅಪ್ ಗ್ರೇಡ್ ಆದವನೇ ಜಾಣ ಎಂದರೆ ಅದು ಅತಿಶಯೋಕ್ತಿ ಎಂದೆನಿಸದು. ಇದಕ್ಕೆ ನಾನೂ ಕೂಡಾ ಹೊರತಾಗಿಲ್ಲ. ನನ್ನ ಈ ಹಿಂದಿನsamsung s duos 1 ಸೆಟ್ (ಆವೃತ್ತಿ4.0.4 ) ಹಲವಾರು apk ತಂತ್ರಾಂಶ ಗಳಿಗೆ ಸಹಕರಿಸದೇ  ಹೋ
ದಕಾರಣ ಕಡಿಮೆ ಬಜೆಟ್ಟಿನ ಉತ್ತಮ ಸ್ಮಾರ್ಟ್ ಫೋನ್ ಹುಡುಕತೊಡಗಿದೆ. ವಾಟ್ಸಾಪ್ ನಲ್ಲಿ, ಅಲ್ಲಿ ಇಲ್ಲಿ ಜಾಲಾಡಿ ಕೊನೆಗೂ Redmi 2 ಆನ್ ಲೈನ್ ನಲ್ಲಿ  ಖರೀದಿಸಿದೆ.

 ಚೀನಾದ ಮಿಲೇನಿಯರ ಲೀ ಜುನ್ ರವರ ಕನಸಿನ ಕಂಪನಿ ಶಿಯಾಮಿ . ಶಿಯಾಮಿ ಕಂಪನಿ  ಕಿಟ್ಕ್ಯಾಟ್ ಆಧಾರಿತ ತಂತ್ರಜ್ನಾನವನ್ನು ಮುತುವರ್ಜಿಯಿಂದ ಸಾಕಷ್ಟು ಬದಲಾಯಿಸಿ ಜನರ ಕೈಗೆ ಕೊಟ್ಟಿದ್ದಾರೆ.
ಶಿಯಾಮಿ  ಸ್ಮಾರ್ಟ್ ಫೋನ್ ಬಂದಾಗ ತನ್ನ ಮಾರುಕಟ್ಟೆ ಪ್ರವೇಶ ಹಾಗೂ ತನ್ನ ಹೊಸತನದ ವೈಶಿಷ್ಟ್ಯಗಳಿಂದ ಜಗತ್ತಿನಾದ್ಯಂತ ಮನೆಮಾತಾಗಿದ್ದು ಇತಿಹಾಸ. ದೈತ್ಯ ಕಂಪನಿಗಳಾದ ಆಪಲ್, ಸ್ಯಾಮ್ಸಂಗ್ ಗಳಿಗೆ ಪ್ರಬಲ ಪೈಪೋಟಿ ಒಡ್ಡಿದಂತೂ ನಿಜ.ಬನ್ನಿ Redmi 2 ನ ಬಗ್ಗೆ ಕೊಂಚ ನೋಟ ಹರಿಸೋಣ.

Android v4.4 (KitKat) OS
8 MP Primary Camera
Dual Sim (GSM + LTE)
Wi-Fi Enabled
2 MP Secondary Camera
4.7 inch Touchscreen
FM Radio
1.2 GHz Qualcomm Snapdragon 410 MSM8916 Quad Core Processor
Expandable Storage Capacity of 32 GB
Rs. 5,999

Redmi 2 ಇದು Corning Gorilla Glass 2 ಹೊಂದಿದ್ದು  ಗೀರು ತರಚುವಿಕೆಯ ಸಮಸ್ಯೆಯಿಂದ ಮುಕ್ತವಾಗಿದೆ.ಇದು ಕಿಟ್ಕ್ಯಾಟ್ ಆಧಾರಿತ ರೋಮ್ ಅನ್ನುಹೊದಿದ್ದು ಕಂಪನಿಯು ಸಾಕಷ್ಟು ಮುತುವರ್ಜಿಯಿಂದ  ಬದಲಾಯಿಸಿ ಜನರ ಕೈಗೆ ಕೊಟ್ಟಿದ್ದಾರೆ. ಬಳಸುವಿಕೆಯು ಹೊಸತನ ನೀಡುತ್ತದೆ.ಕೆಮರಾವುಫೋಟೋತೆಗೆಯಲು ಅತ್ಯುತ್ತಮ ವಾಗಿದೆ.  LED ಪ್ಲಾಷ್ ಲೈಟ್ ತುಂಬಾ ಪ್ರಖರವಾಗಿದೆ . ಪ್ರಂಟ್ ಕ್ಯಾಮರಾ ದಲ್ಲಿ ಪುರುಷರ ವಯಸ್ಸನ್ನು ಮುಖವನ್ನು ಅಳೆಯುವದರ ಮೂಲಕ  ಅಜಮಾಸಾಗಿ ತೋರಿಸುತ್ತದೆ!. 


                                   (Redmi 2  ಮೋಬೈಲ್ ಕೆಮೆರಾದಿಂದ ತೆಗೆದ ಫೋಟೊ)

ರಾತ್ರಿ ವೇಳೆ ವೇದಿಕೆಯ ವೀಡಿಯೋ ಚಿತ್ರೀಕರಣದಲ್ಲಿ ಕೆಮರಾದ  ವೈಟ್ ಬ್ಯಾಲೆನ್ಸ್ ಸೆಟ್ಟಿಂಗ್ಸ್ ಸರಿಯಾಗಿ ಸಹಕರಿಸುತ್ತಿಲ್ಲವೆನ್ನುವದು ಕಂಡುಬಂತು.ಆದರೆ ಹಗಲಿನ ಚನ್ನಾಗಿ  ವೀಡಿಯೋ ಚಿತ್ರೀಕರಣ ಮಾಡಬಹುದು.
ಬಣ್ಣಗಳಲ್ಲಿ ಬೆಳಗುವ LED ನೋಟಿಫಿಕೇಷನ್ ವ್ಯವಸ್ಥೆಯು ಫೋನಿನ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸಿದೆ.  ಇಲ್ಲಿ ನಾವು ಕಡಿಮೆ ದರದ ಸ್ಮಾರ್ಟ್ ಫೋನ್ ಗಳೆಗೆ ಬೆಳಗುವ LED ನೋಟಿಫಿಕೇಷನ್ ವ್ಯವಸ್ಥೆಯನ್ನು ನೀಡಿದ್ದು ಒಂದು ಪ್ರಮುಖ ಅಂಶವೆಂದು ನೆನಪಿಟ್ಟು ಕೊಳ್ಳಬೇಕು.(ಈ ಬಗೆಯ ಸೌಲತ್ತು ಐದಂಕಿಯ ದರದ ಮೊಬೈಲ್ ಗಳಿಗೆ ಮಾತ್ರ ಲಭ್ಯವಿದೆ.)

 ಫೋನ್ ನ ಮಾಟವೆನೋ ಸುಂದರವಾಗಿದೆ ಆದರೆ ಇದರ ಹೊರ ಕವಚವು ನುಣುಪಾಗಿದ್ದು ಫೋನ್ ಹಿಡಿದುಕೊಂಡಾಗ ನಿಮ್ಮ ಕೈಯಿಂದ ಜಾರಿಬಬೀಳುವಂತಿದೆ (ನಾನು ಎರಡು ಬಾರಿ ಬೀಳಿಸಿ ಕೊಂಡಿದ್ದೇನೆ.) ಇದಕ್ಕೆ ಕವರ್ ಅನ್ನು ಖರೀದಿಸುವದು ಅತೀ ಅಗತ್ಯ.

ಫೋನ್ ನ ಸ್ಪೀಕರ್ ಗುಣಮಟ್ಟ ತುಂಬಾಚನ್ನಾಗಿದೆ. ಹಾಡುಗಳನ್ನು ಸ್ಪೀಕರ್ ಮೂಲಕವೇ ಚನ್ನಾಗಿ ಆಲಿಸಬಹುದು.(3.5 mm ನ)ಹೆಡ್ ಪೋನ್ ಹಾಕಿಕೊಂಡರಂತೂ ಕರ್ಣಾನಂದ.


 ಬ್ಯಾಟರಿ ಯು 2200 mah ಹೊಂದಿದ್ದು ಉತ್ತಮ ಬ್ಯಾಕಪ್ ನೀಡುತ್ತಿದೆ.( ಬ್ಯಾಟರಿಯನ್ನು ಬದಲಿಸಬಹುದಾಗಿದೆ)
 ಕಂಪನಿಯವರು  ಹೇಳಿಕೊಂಡಂತೆ ಫೋನ್ ನ ದೊಡ್ಡ ವಿಷೇಶ ಪಾಸ್ಟ್ ಚಾರ್ಜಿಂಗ್ ನ   ವ್ಯವಸ್ಥೆಯುಲ್ಲಿ  ಯಾವ ಬಗೆಯ ಹೊಸತನವೂ ಕಂಡು ಬಂದಿಲ್ಲ.


 ಶಕ್ತಿಶಾಲಿ ಪ್ರೊಸೆಸರ್ ನ ಸಹಾಯದಿಂದ ದೊಡ್ಡ ಗಾತ್ರದ ಆಟಗಳನ್ನು ಲೀಲಾಜಾಜವಾಗಿ ಆಡಬಹುದು.OTG ಸಪೋರ್ಟ್ ಚನ್ನಾಗಿಯೇ ಕೆಲಸ ಮಾಡುತ್ತದೆ. ನೆಟ್ ಅನ್ನು wifi ಮೂಲಕ ನನ್ನ ಹಿಂದಿನ ಸ್ಮಾರ್ಟ್ ಫೋನ್ ಗಿಂತಲೂ ವೇಗವಾಗಿ Redmi 2  ನಲ್ಲಿ ಜಾಲಾಡಬಹುದು.ಉಮ್ಮಚಗಿ ಹಾಗೂಸಿರಸಿಯಲ್ಲಿನ ಏರ್ ಟೆಲ್ ಡಾಟಾ ವೇಗ ಇತ್ತೀಚಿಗೆ ತುಂಬಾ ಕಡಿಮೆ ಇರುವದಕ್ಕೆ 3G ಬಗೆಗೆ ಹೇಳುವುದು ಸುಮ್ಮನೆ ಎನಿಸುತ್ತದೆ

      


           






      
    
     ಥೀಮ್ ನಲ್ಲಿ ನಿಮ್ಮ ಕೀ ಪ್ಯಾಡ್,ಕೂಡಾ  ಬದಲಾಗುತ್ತದೆ. ಇತರ ಫೋನ್ ಗಳಲ್ಲಿ ಈ ಸೌಲಭ್ಯವಿಲ್ಲ.

                      



ಈ ಬ್ಲಾಗ್  ಬರೆಯುವ ಹೊತ್ತಿಗೆ ಫೋನ್ ನ್ ತಂತ್ರಾಶ MIUI 6 ಇದ್ದಿದ್ದು MIUI  6.7.1.0 ಗೆ ಅಪ್ ಡೇಟ್ ಆಗಿದೆ. ಹಲವಾರು ಹೊಸ ಹೊಸ ಬಗೆಯ ಥೀಮ್ ಗಳು ಫೋನ್ ನಲ್ಲಿ ಡೌನ್ ಲೋಡ್ ಮಾಡಿ ಕೊಂಡು ನಿಮ್ಮ ಫೋನ್ ಇನ್ನಷ್ಟು ಸ್ಮಾರ್ಟ್
ಆಗುವಂತೆ ಮಾಡಿಕೊಳ್ಳಬಹುದು. ಬಹು ಪಾಲು ಭಾರತದ ಮಾರುಕಟ್ಟೆ ನಂಬಿದ ಕಂಪನಿಯು ನಮ್ಮ ದೇಶದ ಬಗೆಗೆ ಹಬ್ಬಗಳ ಥೀಮ್ ತಯಾರಿಸಿ ಜನರ ಮನಕ್ಕೆ ಇನ್ನಷ್ಟು ಹತ್ತಿರವಾಗುವ ಕಂಪನಿಯ  ಮಾರುಕಟ್ಟೆ ತಂತ್ರಕ್ಕೆ ನಾವು ತಲೆದೂಗಲೇಬೇಕು.

ಪೋನ್ ನ ಕೆಳಭಾಗದ ಗುಂಡಿಗಳಿಗೆ ಬೆಳಕಿನ ವ್ಯವಸ್ಥೆ ಇಲ್ಲದಿರುವದು ದೊಡ್ಡ ನ್ಯೂನತೆಯೆಂದು ತೋರುತ್ತಿದೆ.ಇದನ್ನೊಂದು ಹೊರತಾಗಿ ನೋಡಿದರೆ ಫೋನ್ ಕೊಟ್ಟ ಬೆಲೆಗೆ ಎಷ್ಟೋ ಪಟ್ಟು ಚನ್ನಾಗಿಯೇ ಇದೆ.

ಬುಧವಾರ, ಜನವರಿ 29, 2014

ಮಾವಿನ ಕಸ್ತ್ರದ ತಂಬುಳಿ

ಯಾ  ಋತುಮಾನದಲ್ಲಿ  ತಕ್ಕಂತೆ ನೈಸರ್ಗಿಕವಾಗಿ ಸಿಗುವಂತಹ  ಬಳ್ಳಿ, ಚಿಗುರು,ಎಲೆ ಹೂವು ,ಕಾಯಿ ,ಹಣ್ಣುಗಳನ್ನು ಬಳಸಿಕೊಂಡು ಅಡುಗೆಮಾಡುವ ವಿಧಾನ ಬಹಳ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ.ಈಗ ನಮ್ಮಲ್ಲಿ ಮಾವಿನ ಕಸ್ತ್ರ  (ಮಾವಿನ ಹೂ)  ಸಾಕಷ್ಟುಅರಳಿದೆ. ಮಾವಿನ ಕಸ್ತ್ರದಿಂದ ರುಚಿಯಾದ ತಂಬುಳಿ ತಯಾರಿಸುವ ವಿಧಾನ ಇಲ್ಲಿದೆ.


                              

ಮೊದಲು ಸ್ವಲ್ಪ ಎಳೆಯ ಮಾವಿನಹೂವನ್ನು  ಉಪ್ಪುನೀರಿನಲ್ಲಿ ತೊಳೆದುಕೊಳ್ಳಿ   ನಂತರ ಅರ್ಧ ಚಮಚ ಉದ್ದಿನ ಬೇಳೆ, ಕಾಲು ಚಮಚಎಳ್ಳು, ಸಣ್ಣ ಚೂರು ಹಸಿಮೆಣಸಿನ ಕಾಯಿ  ಹಾಗು ಮಾವಿನಹೂವನ್ನು    ಸ್ವಲ್ಪ ಹುರಿದುಕೊಂಡು  ಕಾಯಿತುರಿಯ ಸಂಗಡ ರುಬ್ಬಿಕೊಳ್ಳಬೇಕು.  ಕಾಲು  ಲೋಟ  ಮಜ್ಜಿಗೆಯೊಂದಿಗೆ  ರುಚಿಗೆ ತಕ್ಕಷ್ಟು ಉಪ್ಪು ಹಾಗೂ  ಇಂಗು ,ಸಾಸಿವೆ   ಒಗ್ಗರಣೆ ಹಾಕಿ ಸೇರಿಸಿದರೆ   ಮಾವಿನಕಸ್ತ್ರದ   ರುಚಿಯಾದ ತಂಬುಳಿ ಸಿದ್ಧ . 

ಶಿವಾನಂದ ಕಳವೆಯವರು  ಬರೆದಂತೆ ಆಧುನಿಕ ಭರಾಟೆಯಲ್ಲಿ ಹಲವಾರು ವಿಷಯಗಳನ್ನು ’ಮಿಸ್’ ಮಾಡಿಕೊಂಡವರಲ್ಲಿ ನೀವೂ ಆಗಿರ ಬಹುದೇ? ಹಾಗೆ ಆದಲ್ಲಿ ತಂಬುಳಿ ಟ್ರೈ ಮಾಡಿನೋಡಿ ಮತ್ತು ಆರೋಗ್ಯದಿಂದಿರಿ.ಇದೇ ನಮ್ಮೊಳಗೆ ಬ್ಲಾಗ್ ನ ಕಳಕಳಿ.










ಮಂಗಳವಾರ, ಮಾರ್ಚ್ 5, 2013

ಆಹಾ! ನೊರೆ ಬೆಲ್ಲ


        ಆಹಾ! ನೊರೆ ಬೆಲ್ಲ


ಮಲೆನಾಡಿನಲ್ಲಿ ಆಲೆಮನೆಯ ಸೊಗಡು ಶುರುವಾಗುತ್ತಿದೆ.   ಆಲೆಮನೆಯಲ್ಲಿ ಕಬ್ಬಿನ ಹಾಲು ಹಾಗೂ  ನೊರೆ ಬೆಲ್ಲದ ಔತಣ  ನೆಡೆಯುತ್ತಿರುತ್ತದೆ.  ಕಬ್ಬಿನ ಹಾಲು  ಈಗ ನಗರಗಳಲ್ಲಿಯೂ ಲಭ್ಯ.ಆದರೆ ನೊರೆ ಬೆಲ್ಲದ ಸವಿ ನೋಡಬೇಕಾದರೆ ನೀವು ಮಲೆನಾಡಿನ ಆಲೆಮನೆಯ ಅಥಿತಿಯಾಗಲೇ ಬೇಕು. ಗಾಣ ದಿಂದ ಹೊರಬಂದ ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಕಾಯಿಸುತ್ತಾರೆ.ನಾಲ್ಕಾರು ಘಂಟೆಗಳ ನಂತರ   ಕೊಪ್ಪರಿಗೆಯ ಮೇಲೆ ಹೆಗ್ಗುದಿ  ಬೀಳುತ್ತದೆ (ಹೆಗ್ಗುದಿ; ಕಬ್ಬಿನ ಹಾಲಿನ ಕೊನೆಯ ಕುದಿಯುವ ಬಿಂದು.ಅದೇ ಬೆಲ್ಲ ಪರಿಪಕ್ವ ವಾಗುವ ಸಮಯ) ಆ ಬೆಲ್ಲದ ಪರಿಮಳವು ಒಂದೆರಡು ಕಿಲೋಮೀಟರ್ ತನಕ ಹರಡುತ್ತದೆ.ಆ ಹೊತ್ತಿಗೆ ಕೊಪ್ಪರಿಗೆಯಲ್ಲಿ  ಬೆಲ್ಲ ಸಿದ್ಧವಾಗಿರುತ್ತದೆ.ನಂತರ ಅದನ್ನು ಪಾಕದ ಮರಿಗೆಯಲ್ಲಿ ಆರಲು ಬಿಡುತ್ತಾರೆ. ಆ ಹೊತ್ತಿನಲ್ಲಿ   ಬಿಸಿ ಬಿಸಿ ಬೆಲ್ಲದ ಮೇಲೆ ಹೊಂಬಣ್ಣದ ನೊರೆ ಬೆಲ್ಲ ಸಿಗುತ್ತದೆ ಇದೇ ನೊರೆ ಬೆಲ್ಲ.



 ಆಲೆಮನೆಯಲ್ಲಿ ಕಬ್ಬಿನ ಹಾಲನ್ನು ಕುಡಿದು  ಕಬ್ಬಿನ ಸಿಪ್ಪೆಯನ್ನೇ ಚಮಚವನ್ನಾಗಿಸಿ ಬಾಳೆ ದೊನ್ನೆಯಲ್ಲಿ ನೊರೆ ಬೆಲ್ಲವನ್ನು ತಿನ್ನುವಾಗ ಸಿಗುವ  ಮಜವೇ ಬೇರೆ.  ಈ ಅವಕಾಶ ಸಿಕ್ಕರೆ ತಪ್ಪಿಸಕೊಳ್ಳಬೇಡಿ.



ಶನಿವಾರ, ಫೆಬ್ರವರಿ 2, 2013

ಹಿಲಾಲು ಬೆಳಕಿನಲ್ಲಿ ಯಕ್ಷಗಾನ



                        

ಸುಮಾರು ಆರು ದಶಕದ ಹಿಂದೆ  ದೊಂದಿ ಅಥವಾ ಹಿಲಾಲು ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನವು ನೆಡೆಯುತ್ತಿತ್ತು.ತರುವಾಯ ಹೊಸ ಹೊಸ ಸಂಶೋಧನೆಗೆ ರಂಗಸ್ಥಳವು ಒಗ್ಗಿಕೊಂಡು ಬೆಳಕಿನ ಆಕರಕ್ಕೆ ಬಾಡಿಗೆಗೆ ತಂದ ಸೀಮೆ ಎಣ್ಣೆಯ ಗ್ಯಾಸ್ ಲೈಟ್ (ಗ್ಯಾಸೋಲಿನ್ ದೀಪ) , ನಂತರ ವಿದ್ಯುತ್ ಶಕ್ತಿಯು ಬಳಕೆಯಲ್ಲಿ ಬಂದವು.












ಪೂರ್ವದಲ್ಲಿ ನೆಡೆಯುತ್ತಿದಂತಹ ಹಿಲಾಲು ಬೆಳಕಿನಲ್ಲಿ ನೆಡೆಯುತ್ತಿದಂತಹ ಯಕ್ಷಗಾನವು ಇತ್ತಿಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಕತ್ಲೆಹಳ್ಲದಲ್ಲಿ ಜರುಗಿತು.{ಇಲ್ಲಿ ಅರಿವೆಯನ್ನು ಚಂಡಿನ ಆಕಾರದಲ್ಲಿ ಸುತ್ತಿ ಅದನ್ನು ಕಬ್ಬಿಣದ ಬಂಡಿಯ ಮೇಲೆ ಇಟ್ಟು ಎಣ್ಣೆಯನ್ನು ಆಗಾಗ ಹಾಕುತ್ತಾ ಬೆಳಕನ್ನು ಮಾಡಿದ್ದಾರೆ}ಸಾಂಪ್ರದಾಯ ಬದ್ಧವಾಗಿ ಕೋಂಡಗಿ ವೇಷ, ಪೀಟಿಕಾ ಸ್ತ್ರೀ ವೇಷ, ಹಾಗೂ ಬಾಲಗೋಪಾಲವೇಷಗಳಿಂದ ಶುರುವಾದ ."ಕಾಲನೇಮಿ ಕಾಳಗ"ವೆಂಬ ಯಕ್ಷಗಾನವು   ಹೊಸ ತನಕ್ಕೆ ಹೊಂದಿಕೊಂಡಂತಹ   ಪ್ರೇಕ್ಷಕರಿಗೆ ಒಂದು ಐತಿಹಾಸಿಕ ಹಿನ್ನೂಟಕ್ಕೆ ಕೊಂಡೊಯ್ದು ತನ್ಮೂಲಕ ವಿಶಿಷ್ಟವಾದ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಶನಿವಾರ, ಮಾರ್ಚ್ 24, 2012

ಶಿರಸಿ ಜಾತ್ರೆಯಲ್ಲೊಂದು ಸುತ್ತು

ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜರುಗುವ    ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯು ಬಹಳ ಹೆಸರುವಾಸಿಯಾಗಿದೆ.    ಜಾತ್ರೆಯ ಸಮಯದಲ್ಲಿ ಎಲ್ಲಿದ್ದರೂ   ನೆಂಟರಿಷ್ಟರು  ಪರವೂರಿನಲ್ಲಿ ಬೀಡುಬಿಟ್ಟ ಮೂಲನಿವಾಸಿಗಳು ಜಾತ್ರೆಯನ್ನು ಖಂಡಿತ ಮಿಸ್ ಮಾಡಿಕೊಳ್ಳುವದಿಲ್ಲ. ಜಾತ್ರೆ ಪೇಟೆಯಲ್ಲಿ ರಾತಿ ವೇಳೆಯಲ್ಲಿ ತಿರುಗಾಡುವದೇ ಒಂದು ಸೊಗಸು ಒಂಥರಾ ಉಮೇದಿ!.  ಜಾತ್ರೆ ಪೇಟೆಯಲ್ಲಿಒಂದು ಸಲ  ಸುತ್ತಾಡಿದವರು ಮತ್ತೆರಡು ದಿನ ಬಿಟ್ಟು ಪುನಃ ತಾಸುಗಟ್ಟಲೇ ಸ್ನೇಹಿತರು ಮನೆಯವರೊಡನೆ ಸುತ್ತಾಡುವದು ಸಾಮಾನ್ಯ. ಇದಕ್ಕೆ ನಾನೂ ಕೂಡಾ ಹೊರತಾಗಿಲ್ಲವಾಗಿತ್ತು. ಎರಡು ಮೂರುದಿನ ಜಾತ್ರೆಯಲ್ಲಿ ತಿರುಗಾಡಿ ,ಪೋಟೋಗ್ರಫಿ ಮಾಡುವ ಸಲುವಾಗಿ ಮತ್ತೊಮ್ಮೆ ಜಾತ್ರೆಗೆ ತೆರಳಿದೆ. ಆ ಹೊತ್ತಿಗಾಗಲೇ ಜಾತ್ರಾ ವಿಧಿವಿಧಾನಗಳು ಮುಗಿದು ಮಾರಿಕಾಂಬಾ ದೇವಿಯು ಮಾರಿ ಚಪ್ಪರದಿಂದ ನಿರ್ಗಮಿಸಿಯಾಗಿತ್ತು.


      



 






ಮಂಗಳವಾರ, ಜನವರಿ 3, 2012

ಕಾಲಚಕ್ರ ತಿರುಗುತಿದೆ

ಕಳೆದ ಸಾಲಿನಲ್ಲಿ ಮೂಡಿಬಂದ ರಾಕ್ ಸ್ಟಾರ್ ಸಿನಿಮಾ ಎಷ್ಟು ಹಣಗಳಿಸಿತೋ ನನಗೆ ಗೊತ್ತಿಲ್ಲ ಆದರೆ ಆ ಸಿನೆಮಾ  ದಶಕಗಳ ಹಿಂದಿನ ಸಿನೆಮಾಗಳ ಬ್ಯಾನರ್ ಅನ್ನು ನೆನಪಿಸಿದ್ದು ಸತ್ಯ. ಆಧುನಿಕ ಯಂತ್ರೋಪಕರಣಗಳು ಕೆಲಸಗಳನ್ನು ಹಗುರ ಮಾಡುತ್ತವೆ .ಹಳೆಯ ತಲೆಮಾರಿನ ಕೆಲ ಕೆಲಸಗಾರರಿಗೆ ಅಂದರೆ ಚಿತ್ರ ಕಲಾವಿದರು ಸಂಗೀತ ಕಲಾವಿದರಿಗೆ  ಹೊಸ ನಮೂನೆಯ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ತುಸು ಕಂಗೆಡಿಸಲು ಸಾಕು. ವಿಷಯ ಮತ್ತೇನಲ್ಲ ಈಗ ಮತ್ತೆ ಹಳೆಯ ಜಮಾನದ್ದು   ಫ್ಯಾಶನ್ ಆಗುತ್ತಿದೆ.ಫ್ಯಾಶನ್ ಅನ್ನುವದಕ್ಕಿತಲೂ ಹೊಸ ಟ್ರೆಂಡ್ ಅದರೆ ತಪ್ಪೇನಿಲ್ಲ.





ಹಳೆಯ ಕಾಲದ ಬ್ಯಾನರ್ಮುಕದ್ದರ್ ಕಾ ಸಿಕಂದರ್  ಒಮ್ಮೆ  ನೋಡಿ ಆ ಕಲಾವಿದನ ಕಲ್ಪನೆಗೆ ತಲೆದೂಗಲೇ  ಬೇಕು.ಇಲ್ಲಿ  ಆ ನಾಲ್ಕು ಜನರ ನಡುವೆ ನಿರ್ಭೀಡೆಯಿಂದ ಬೈಕ್ ಚಲಾಯಿಸುತ್ತಿರುವ ಹೀರೋ, ಆ ಸಿನೆಮಾದ ಹೆಸರು  ಆದು ಮೂಡಿಬಂದ ರೀತಿ ಎನೋ ಹೊಸತನ ಇಂದಿಗೂ ಕಂಡುಬರುತ್ತದೆ.










 ಅದೇನೆ ಇರಲಿ ನನಗನಿಸಿದಂತೆ ರಾಕ್ ಸ್ಟಾರ್ ನಿಂದ ಹುಟ್ಟಿದ
ಹೊಸ ಬ್ಯಾನರ್  ಟ್ರೆಂಡ್  ಇನ್ನು ಕೆಲ ವರ್ಷ ಖಾಯಂ ಆಗಿ ಉಳಿಯ ಬಹುದು. ಇನ್ನೂ ಕನ್ನಡದವರು ಇದರ ಬಗ್ಗೆ ಯೋಚಿಸಿದಂತೆ ಕಂಡು ಬಂದಿಲ್ಲ.ರಾಕ್ ಸ್ಟಾರ್ ನಂತರ ಡರ್ಟಿ ಪಿಚ್ಚರ್ ಹಾಗೂ ಜೂನ್ ೧೫  ೨೦೧೨ ರಂದು ಬಿಡುಗಡೆ ಆಗಲಿರುವ ರೌಡಿ ರಾಥೋರ್ ಸಿನೆಮಾ ಕೂಡಾ ಆ ಶೈಲಿಯ ಬ್ಯಾನರಿನಲ್ಲಿಯೇ  ಮೂಡಿ ಬಂದಿದೆ. 







                                                             (ರೌಡಿ ರಾಥೋರ್)


ಇನ್ನು ಮುಂದೆ ಜನರಿಗೆ ಮಾಲ್ ಮಲ್ಟಿಪ್ಲೆಕ್ಸ್ ಗಳು ಜನರಗೆ  ಬೇಜಾರಾಗಿ ಮತ್ತೆ ಹಳೆ ಕಾಲದ ಟೆಂಟ್ ಸಿನೆಮಾ ಶೋ ಶಹರದಲ್ಲಿ   ಶುರುವಾದರೆ ಆಶ್ಚರ್ಯವಿಲ್ಲ!.