ಭಾನುವಾರ, ಆಗಸ್ಟ್ 28, 2011

ಮೈದಾನದಲ್ಲಿ





 ಮೈದಾನದಲ್ಲಿ


ಅಣ್ಣನ ಕೂಗಿಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಜನ ಹಾಜರು
ಬಾಯೇ ಬಿಡದ ಕೋಟಿ ಹಣಕ್ಕೆ ಹರಾಜಾದ ಕ್ರಿ'ಕೆಟ್ಟಿಗ'ರು. 


ಒಮ್ಮೆ ಕೂಗಿದರೂ ಸಾಕಿತ್ತು ಸಚಿನ್ನು , ಧೋನಿ
ರಾಮಲೀಲಾ ದಲ್ಲಿ ಮೊಳಗುತ್ತಿತ್ತು ಇನ್ನಷ್ಟು ದನಿ


 ಕ್ರಿಕೆಟಿಗರೇ ಇನ್ನಾದರೂ ದೇಶದ ಹಿತಕ್ಕೆ ಎದ್ದು ನಿಲ್ಲಿ
ನಿಮ್ಮ ಆರಾಧಿಸುವ ಕೋಟಿ  ಮನವನ್ನು  ಗೆಲ್ಲಿ


ಹೀಗಿದ್ದರೂ  ಕೆಲವರಿಗೆ  ನೀವೇ ಹೀರೋಗಳು
ನಿಮ್ಮನ್ನೂ ಆಡಿಸುತ್ತಿದೆಯೇ ಕಾಣದ ಕೈಯ ನೆರಳು?.


ನಿಮ್ಮನೆಬ್ಬಿಸಲು ಬರಬೇಕೆ ಇನ್ನೂ ಬರಬೇಕೇ ಅಣ್ಣಾ?
ದೇಶಕ್ಕೇ ಬೆಳಗಾಗಿ ಹೋಗಿದೆ  ಈಗಲಾದರೂ ನೀವು ಏಳಿರಣ್ಣಾ.